ಲೇಬಲ್‌ಗಳು

ಸೋಮವಾರ, ಆಗಸ್ಟ್ 18, 2014

ಹೀಗೆ ಗೀಚಿದ ಸಾಲುಗಳು...

ಎಲ್ಲರು ಬದಲಾಗ್ತರೆ..
ಯಾರು ಊಳಿಯೋದಿಲ್ಲ...

ಏನೊಂದು ಒಲಿಯುವುದಿಲ್ಲ...

ನಕಾರಾತ್ಮಗಳ ಸಹವಾಸದಲ್ಲಿ ಆಶಾವಾದಿಯ ಮಾರಣ ಹೋಮ!
--------------------

ಕಾನನದ ಕಾಲು ದಾರಿಯಲ್ಲಿ ಕಲ್ಲೊಂದ ಎಡವಿ,
ಅಯ್ಯೋ ಎನಿಸಿ-ಮರದ
ಪೊಟರೆಯಲ್ಲಿಟ್ಟು ಬಂದೆ.

ಮುಂದೊಂದು ದಿನ ಆ ದಾರಿಯಲಿ ಕಂಡೆ
ಅಲ್ಲಾಗಿತ್ತು ದೇವರೊಬ್ಬರ ಪ್ರಾಣ ಪ್ರತಿಷ್ಠೆ!
11/೦8/14
----------------
ಆಸೆಗಳ ಮೂಟೆ ಕಟ್ಟಬೇಕಿದೆ,
ಮನಸನ್ನು ಹಿಡಿತದಲ್ಲಿಡಲು.
ಅರಬ್ಬಿ ಸಮುದ್ರಕ್ಕೆ ಹೋಗುವ ಆಸೆಯೊಂದಿದೆ,
ಕಟ್ಟಿಟ್ಟ ಆಸೆಗಳ ಮೂಟೆಯನು ತೇಲಿಬಿಡಲು.
೨೯/೦೭/೧೪

ಏನು ಗೀಚಲು ಉಳಿದಿಲ್ಲ
ಗೀಚಿದ ಓದಲು ಯಾರಿಲ್ಲ
ಇದ್ದರೂ ಕೊಡಲು ಮನಸ್ಸಿಲ್ಲ
ಮನಸ್ಸಿನ ಮಾತಿದು, ಮಿತಿಯಿಲ್ಲಾ...
----------

ಹಿಂದಿರುಗಿ ಬಾರದ ಕನಸಿನ ಲೋಕಕ್ಕೆ
ಹೋಗ್ಬೇಕಿದೆ ನಾನು.
ಕನಸ್ಸಂದರೆ ಕನಸಲ್ಲಾ,
ನನಸಾಗಿಯು ಕನಸಾಗಿ ಉಳಿದಿರುವ ಭ್ರಮೆಗೆ ಜಾರಬೇಕಿದೆ ಎಂದಿನಂತೆ ನಾನು!

೨೫/೭/೧೪
----------------
ಹೀಗೆ ಒಂದು ದಿನ ಯೋಚನೆ ಮಾಡ್ತಿದ್ದೆ, ನಾನ್ಯಾಕೆ ಹೀಗೆ ಅಂತ. ವಯಸ್ಸಿಗೆ ಮೀರಿದ ಪ್ರೌಢತೆ, ಆಸೆ, ಕನಸು,...ಹುಮ್ಮಸ್ಸು, ನನ್ನದೆ ಒಂದು ಜಗತ್ತು ಕಟ್ಟಿಕೊಳ್ಳೋ ಆಕಾಂಕ್ಷೆ.

"ನಾನು ಯಾರು?"
ಈ ನಡುವೆ ಈ ಪ್ರಶ್ನೆ ಬಹಳ ಕಾಡುತ್ತೆ ನನ್ನ!

ಯಾರು ಬೇಡ ಎನಿಸುತ್ತೆ ಅವಗವಗ
ಅನಿಸಿದ್ ತಕ್ಷಣ ಅಮ್ಮನ "ಚಿಟ್ಟಿ" ಅಂತ ಕೂಗು ಕೇಳ್ಸುತ್ತೆ!
ಅವಳ ದನಿಗೆ "ಏನಮ್ಮ" ಅಂತ ಇದ್ದಲ್ಲಿಂದ್ಲೆ ಕೂಗ್ ಹಾಕ್ದಾಗ ತಿಳಿಯುತ್ತೆ, ಕೆಲವರಿಲ್ದೆ ಜೀವನ ಏನೂ ಅಲ್ಲಾ ಅಂತ!

----------------

ನನ್ನ ಮಾಯಾ ಲೋಕದಲ್ಲಿ,
ಅಚ್ಚಳಿಯದ ಹೆಸರೊಂದು ಉಂಟು,
ಅಂದದ ಹೆಸರೊಂದು ಉಂಟು,

ಆ ಹೆಸರಲ್ಲಿ ನನ್ನ ಕಲ್ಪನೆಗಳು ಉಂಟು,
ಕಾಲ ಜ್ಞಾನದ ತತ್ವ ಒಂದುಂಟು,
"ಇದಾವುದು ನಿನ್ನದಲ್ಲ! "
ನನ್ನದಲ್ಲದ ಮಾಯಾ ಲೋಕದಲ್ಲಿ ನನ್ನದಲ್ಲದ ಹೆಸರೊಂದು ಉಂಟು!

-------------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ