ಜೀವಕೆ ಬಾಳಿನ ಆಸರೆಯಂತೆ
ಕಣ್ಣಿಗೆ ರೆಪ್ಪೆಯ ಬರವಸೆಯಂತ
ಸಂತಸ ದುಃಖದ ಕೈಸೆರೆಯಂತೆ
ಆತ್ಮಕ್ಕೆ ದೇಹದ ಸೆರೆಮನೆಯಂತೆ
ಅಂತೆ ಕಂತೆಗಳ ಪಂಜರವಂತೆ
ಪಂಜರದ ಗಿಳಿಮರಿ ನಾವಂತೆ.
ಮೌನದ ಮಾತುಗಳ ನಡುವೆಯೇ
ಹೂವೊಂದು ಅರಳಿದೆ...
ಮೊಗ್ಗಾಗಿದ್ದ ಮನಸ್ಸು
ಬಾನಿನ ಅಂಗಳಕ್ಕೆ ಜಿಗಿದಿದೆ...
ಹೇಳಿ ಬಿಡು ಮನವೇ
ಆ ಒಲವ ಪದವ...
ಕನಸಿನ ಕಡಲು ನನ್ನ ಕವನ
ಮಾಯೆಯ ನೌಕೆ ನನ್ನ ಕವನ
ಪದಗಳಿಲ್ಲದ ಸಾಲು ನನ್ನ ಕವನ
ಆಟಕ್ಕೂ ಇಲ್ಲದ ಲೆಕ್ಕಕ್ಕೂ ಇಲ್ಲದ
ಇಳಿಜಾರು ನನ್ನ ಕವನ...
ಆಸೆಗಳು ಯಾಕೆ ಬರುತ್ತೆ?
ಕನಸುಗಳು ಯಾಕೆ ಬೀಳುತ್ವೆ!?
ಪ್ರೀತಿ ಯಾಕೆ ಕಾಣ್ಸಲ್ಲಾ?!
ದ್ವೇಷ ಯಾಕೆ ಸುಡುತ್ತೆ?
ಪ್ರಶ್ನೆಗಳು - ಉತ್ತರಗಳು ಯಾಕೆ ಹುಡುಗಾಟ ಆಡುತ್ತೆ!?
________________________________________________________________
ಮೌನ ಪ್ರತಿಭಟನೆ
ಮನದ ಮಾತುಗಳು ನಿಶ್ಯಬ್ದ
ಕಪ್ಪು ಬಿಳುಪಿನ ಕನಸಲ್ಲೂ
ಬಣ್ಣಗಳ ಮರ್ಮ
ಆಸೆಯ ಕಣ್ಗಳಿಗೆ
ಅಸೂಯೆಯ ಕಾಡಿಗೆ
ಅರ್ಥವಾಗದ ಕಥೆಗೆ
ಹಿನ್ನುಡಿಯ ಭರವಸೆ.
ಕಡಲಲೆಗಳ ಸದ್ದು
ಕಡಲ ತೀರದ ಮೌನ
ಗದ್ದಲದಲ್ಲೂ ಸದ್ದಿಲ್ಲದ ಮನಸ್ಸು
ಇನ್ನೇನು ಅಲೆಯೊಂದು ಬಂತು ನನ್ನೆಡೆಗೆ
ಮಿಂದು ತಣಿಯುವ ಸಮಯ
ಎಚ್ಚರವಾದಾಗ, ಕನಸಲ್ಲೂ ನನಸಾಗದ ಕನಸು!
ಜೂಜಾಟ ಈ ಬದುಕು
ಹಿಂದಿದ್ದ ಛಲವಿಲ್ಲ ಹಠವಿಲ್ಲ
ಗುರಿಗೆ ಗುರುವಿನ್ನಿಲ್ಲ
ಮನದ ಗಡಿ ದಾಟಿರಲು
ಪರದೇಶಿ ವೈಭೋಗ
ತಾನಿಲ್ಲ ತನ್ನದಲ್ಲ
ತನ್ನವರಾರು ಅರಿವಿಲ್ಲ
ಜೂಜಾಟ ಈ ಬದುಕು!
ಮನಸಿನ ಗಜಿಬಿಜಿಯಲ್ಲು
ಮಳೆ ಹನಿಗಳ ಹಾವಳಿ
ತುಸು ಹೆಚ್ಚೇ ಆವೇಗ
ಹುಚ್ಚು ಮನಸಿಗೆ ಆಗಾಗ.
ಬರಿದಾದ ಮನದಲ್ಲೂ
ಸಂತಸದ ಮಾಯೆ
ತುಸು ತಂಪಾದ ಗಾಳಿಯಲ್ಲೂ
ಕಾಡಿದೆ ರೈತನ ಛಾಯೆ.
ಕಣ್ಣಿಗೆ ರೆಪ್ಪೆಯ ಬರವಸೆಯಂತ
ಸಂತಸ ದುಃಖದ ಕೈಸೆರೆಯಂತೆ
ಆತ್ಮಕ್ಕೆ ದೇಹದ ಸೆರೆಮನೆಯಂತೆ
ಅಂತೆ ಕಂತೆಗಳ ಪಂಜರವಂತೆ
ಪಂಜರದ ಗಿಳಿಮರಿ ನಾವಂತೆ.
೦೨ ಜನವರಿ ೨೦೧೬
___________________________________________________________ಮೌನದ ಮಾತುಗಳ ನಡುವೆಯೇ
ಹೂವೊಂದು ಅರಳಿದೆ...
ಮೊಗ್ಗಾಗಿದ್ದ ಮನಸ್ಸು
ಬಾನಿನ ಅಂಗಳಕ್ಕೆ ಜಿಗಿದಿದೆ...
ಹೇಳಿ ಬಿಡು ಮನವೇ
ಆ ಒಲವ ಪದವ...
೧೦ ಜನವರಿ ೨೦೧೬
_____________________________________________________________ ಕನಸಿನ ಕಡಲು ನನ್ನ ಕವನ
ಮಾಯೆಯ ನೌಕೆ ನನ್ನ ಕವನ
ಪದಗಳಿಲ್ಲದ ಸಾಲು ನನ್ನ ಕವನ
ಆಟಕ್ಕೂ ಇಲ್ಲದ ಲೆಕ್ಕಕ್ಕೂ ಇಲ್ಲದ
ಇಳಿಜಾರು ನನ್ನ ಕವನ...
೧೧ ಜನವರಿ ೨೦೧೬
_______________________________________________________________ಆಸೆಗಳು ಯಾಕೆ ಬರುತ್ತೆ?
ಕನಸುಗಳು ಯಾಕೆ ಬೀಳುತ್ವೆ!?
ಪ್ರೀತಿ ಯಾಕೆ ಕಾಣ್ಸಲ್ಲಾ?!
ದ್ವೇಷ ಯಾಕೆ ಸುಡುತ್ತೆ?
ಪ್ರಶ್ನೆಗಳು - ಉತ್ತರಗಳು ಯಾಕೆ ಹುಡುಗಾಟ ಆಡುತ್ತೆ!?
________________________________________________________________
ಮೌನ ಪ್ರತಿಭಟನೆ
ಮನದ ಮಾತುಗಳು ನಿಶ್ಯಬ್ದ
ಕಪ್ಪು ಬಿಳುಪಿನ ಕನಸಲ್ಲೂ
ಬಣ್ಣಗಳ ಮರ್ಮ
ಆಸೆಯ ಕಣ್ಗಳಿಗೆ
ಅಸೂಯೆಯ ಕಾಡಿಗೆ
ಅರ್ಥವಾಗದ ಕಥೆಗೆ
ಹಿನ್ನುಡಿಯ ಭರವಸೆ.
೦೭ ಏಪ್ರಿಲ್ ೨೦೧೬
___________________________________________________________________ಕಡಲಲೆಗಳ ಸದ್ದು
ಕಡಲ ತೀರದ ಮೌನ
ಗದ್ದಲದಲ್ಲೂ ಸದ್ದಿಲ್ಲದ ಮನಸ್ಸು
ಇನ್ನೇನು ಅಲೆಯೊಂದು ಬಂತು ನನ್ನೆಡೆಗೆ
ಮಿಂದು ತಣಿಯುವ ಸಮಯ
ಎಚ್ಚರವಾದಾಗ, ಕನಸಲ್ಲೂ ನನಸಾಗದ ಕನಸು!
೧೧ ಏಪ್ರಿಲ್ ೨೦೧೬
___________________________________________________________________ ಜೂಜಾಟ ಈ ಬದುಕು
ಹಿಂದಿದ್ದ ಛಲವಿಲ್ಲ ಹಠವಿಲ್ಲ
ಗುರಿಗೆ ಗುರುವಿನ್ನಿಲ್ಲ
ಮನದ ಗಡಿ ದಾಟಿರಲು
ಪರದೇಶಿ ವೈಭೋಗ
ತಾನಿಲ್ಲ ತನ್ನದಲ್ಲ
ತನ್ನವರಾರು ಅರಿವಿಲ್ಲ
ಜೂಜಾಟ ಈ ಬದುಕು!
೧೯ ಏಪ್ರಿಲ್ ೨೦೧೬
____________________________________________________________________ ಮನಸಿನ ಗಜಿಬಿಜಿಯಲ್ಲು
ಮಳೆ ಹನಿಗಳ ಹಾವಳಿ
ತುಸು ಹೆಚ್ಚೇ ಆವೇಗ
ಹುಚ್ಚು ಮನಸಿಗೆ ಆಗಾಗ.
ಬರಿದಾದ ಮನದಲ್ಲೂ
ಸಂತಸದ ಮಾಯೆ
ತುಸು ತಂಪಾದ ಗಾಳಿಯಲ್ಲೂ
ಕಾಡಿದೆ ರೈತನ ಛಾಯೆ.
೨೫ ಏಪ್ರಿಲ್ ೨೦೧೬
___________________________________________________________________