ಲೇಬಲ್‌ಗಳು

ಮಂಗಳವಾರ, ಏಪ್ರಿಲ್ 26, 2016

ChuTukugaLu

ಜೀವಕೆ ಬಾಳಿನ ಆಸರೆಯಂತೆ
ಕಣ್ಣಿಗೆ ರೆಪ್ಪೆಯ ಬರವಸೆಯಂತ
ಸಂತಸ ದುಃಖದ ಕೈಸೆರೆಯಂತೆ
ಆತ್ಮಕ್ಕೆ ದೇಹದ ಸೆರೆಮನೆಯಂತೆ
ಅಂತೆ ಕಂತೆಗಳ ಪಂಜರವಂತೆ
ಪಂಜರದ ಗಿಳಿಮರಿ ನಾವಂತೆ.
೦೨ ಜನವರಿ ೨೦೧೬
___________________________________________________________
 ಮೌನದ ಮಾತುಗಳ ನಡುವೆಯೇ
ಹೂವೊಂದು ಅರಳಿದೆ...
ಮೊಗ್ಗಾಗಿದ್ದ ಮನಸ್ಸು
ಬಾನಿನ ಅಂಗಳಕ್ಕೆ ಜಿಗಿದಿದೆ...
ಹೇಳಿ ಬಿಡು ಮನವೇ
ಆ ಒಲವ ಪದವ...
೧೦ ಜನವರಿ ೨೦೧೬
_____________________________________________________________ 
ಕನಸಿನ ಕಡಲು ನನ್ನ ಕವನ
ಮಾಯೆಯ ನೌಕೆ ನನ್ನ ಕವನ
ಪದಗಳಿಲ್ಲದ ಸಾಲು ನನ್ನ ಕವನ
ಆಟಕ್ಕೂ ಇಲ್ಲದ ಲೆಕ್ಕಕ್ಕೂ ಇಲ್ಲದ
ಇಳಿಜಾರು ನನ್ನ ಕವನ...
೧೧ ಜನವರಿ ೨೦೧೬
 _______________________________________________________________
 ಆಸೆಗಳು ಯಾಕೆ ಬರುತ್ತೆ?
ಕನಸುಗಳು ಯಾಕೆ ಬೀಳುತ್ವೆ!?
ಪ್ರೀತಿ ಯಾಕೆ ಕಾಣ್ಸಲ್ಲಾ?!
ದ್ವೇಷ ಯಾಕೆ ಸುಡುತ್ತೆ?
ಪ್ರಶ್ನೆಗಳು - ಉತ್ತರಗಳು ಯಾಕೆ ಹುಡುಗಾಟ ಆಡುತ್ತೆ!?
________________________________________________________________
ಮೌನ ಪ್ರತಿಭಟನೆ
ಮನದ ಮಾತುಗಳು ನಿಶ್ಯಬ್ದ
ಕಪ್ಪು ಬಿಳುಪಿನ ಕನಸಲ್ಲೂ 
ಬಣ್ಣಗಳ ಮರ್ಮ
ಆಸೆಯ ಕಣ್ಗಳಿಗೆ
ಅಸೂಯೆಯ ಕಾಡಿಗೆ
ಅರ್ಥವಾಗದ ಕಥೆಗೆ
ಹಿನ್ನುಡಿಯ ಭರವಸೆ. 
೦೭ ಏಪ್ರಿಲ್ ೨೦೧೬
___________________________________________________________________
ಕಡಲಲೆಗಳ ಸದ್ದು
ಕಡಲ ತೀರದ ಮೌನ
ಗದ್ದಲದಲ್ಲೂ ಸದ್ದಿಲ್ಲದ ಮನಸ್ಸು
ಇನ್ನೇನು ಅಲೆಯೊಂದು ಬಂತು ನನ್ನೆಡೆಗೆ
ಮಿಂದು ತಣಿಯುವ ಸಮಯ
ಎಚ್ಚರವಾದಾಗ, ಕನಸಲ್ಲೂ ನನಸಾಗದ ಕನಸು!
೧೧ ಏಪ್ರಿಲ್ ೨೦೧೬
___________________________________________________________________ 
ಜೂಜಾಟ ಈ ಬದುಕು
ಹಿಂದಿದ್ದ ಛಲವಿಲ್ಲ ಹಠವಿಲ್ಲ
ಗುರಿಗೆ ಗುರುವಿನ್ನಿಲ್ಲ
ಮನದ ಗಡಿ ದಾಟಿರಲು
ಪರದೇಶಿ ವೈಭೋಗ
ತಾನಿಲ್ಲ ತನ್ನದಲ್ಲ
ತನ್ನವರಾರು ಅರಿವಿಲ್ಲ
ಜೂಜಾಟ ಈ ಬದುಕು!
೧೯ ಏಪ್ರಿಲ್ ೨೦೧೬
____________________________________________________________________ 
ಮನಸಿನ ಗಜಿಬಿಜಿಯಲ್ಲು
ಮಳೆ ಹನಿಗಳ ಹಾವಳಿ
ತುಸು ಹೆಚ್ಚೇ ಆವೇಗ
ಹುಚ್ಚು ಮನಸಿಗೆ ಆಗಾಗ.
ಬರಿದಾದ ಮನದಲ್ಲೂ
ಸಂತಸದ ಮಾಯೆ
ತುಸು ತಂಪಾದ ಗಾಳಿಯಲ್ಲೂ
ಕಾಡಿದೆ ರೈತನ ಛಾಯೆ.
೨೫ ಏಪ್ರಿಲ್ ೨೦೧೬
___________________________________________________________________

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ