ಸರ್ವರ ಮನದಲಿ ನೆಲೆಯೂರಬೇಕಿಲ್ಲ
ನೆನೆದವರ ಸಂಗ ನಿರಂತರವಿರಬೇಕಿಲ್ಲ
ಜೀವನ ಚಕ್ರದ ಗಾಡಿ ನಿಲ್ಲುವುದಿಲ್ಲ
ನಿಂತಾಗ ಅದ ನೋಡಲು ನಾನಿರುವುದಿಲ್ಲ.
#ಹುಚ್ಚುಸಾಲುಗಳು. 21 ಜನವರಿ 2015
__________________________________________________
ಕಣ್ಣಿನ ಪುಟ್ಟ ಚಿಪ್ಪಲ್ಲಿ ಅವಳದೇ ಒಂದು ಲೋಕ,
ಅವಳ ಕನಸಿನ ತೀರಕ್ಕೆ ಮಿತಿಯಿಲ್ಲಾ.
ಕಡಲ ಕಾಯುವ ದೊಣ್ಣೆ ನಾಯಕನಪ್ಪಣೆ ಬೇಕಿಲ್ಲ!
ಕಡಲ ಕಣ್ಣಲ್ಲಿಯೂ ಅವಳದೆ ಕನಸು!
_______________________________________________________
ಕಡಲ ಅಲೆಗಳಲಿ
ತೇಲಿ ಬಿಡಬೇಕಿದೆ ಒಂದು ಚೀಲ...
ಕೂಡಿಟ್ಟ ಕನಸನು ಮೂಟೆ ಕಟ್ಟಿ
ಬರೆದಿಟ್ಟ ಕವನಗಳ ಜೊತೆಗೆ ತುರುಕಿ
ಬಚ್ಚಿಡಲು ಹೇಳಬೇಕಿದೆ
ಅಲೆಗಳ ಕಿವಿಯಲ್ಲಿ!
ಮಳೆಯ ಗುಂಗುನಲಿ
ನಿನ್ನ ನೆನಪಿರಲಿ
ತೇಲಿ ಬಿಡುವೆನೊಂದು ಕವನ.
ಹಾಳೆ ದೋಣಿಯಲಿ
ಪ್ರೀತಿ ಮಾತಿರಲಿ
ತೇಲಿ ಬಿಡು ನೀ ಅದನ.
ಕಡಲ ಅಲೆಗಳಲಿ
ನಿಂತ ನೀರಿನಲಿ
ಹಾಯ ದೋಣಿ ನನ್ನ ಕವನ
ಸುಡುವ ಬಿಸಿಲಿರಲಿ
ಕೊರೆವ ಚಳಿಯಿರಲಿ
ಸಾಗುತಿರಲಿ ನಿನ್ನೆಡೆಗೆ ನನ್ನ ಪಯಣ!
ಕರಾಳ ದಿನ
ಕಣ್ಣಲ್ಲಿ ಕಪ್ಪು ಕತ್ತಲು
ಮನಸ್ಸಲ್ಲಿ ಕೋಲ್ಮಿಂಚು
ಮಾತಿಗೆ ಸಿಗದ ಮೌನ
ಗುರಿಯ ಮುಚ್ಚಿಟ್ಟ ಕಂಬನಿ ಮಂಜು
ಹುಡುಕಾಟದಲ್ಲಿ ದಣಿವು
ಬಾಯಾರಿಕೆಗೆ ಒಂದೇ ಪರಿಹಾರ- ಛಲ!
ಮೌನದಲ್ಲಿ ಮಾತುಗಳ ದೊಂಬರಾಟ.
ಮನದ ಕನ್ನಡಿಯಲ್ಲಿ ಕಾಡಿಸುವ ಕನಸುಗಳು.
ಹಿಡಿಯುವವರಿಲ್ಲ ಆಲೋಚನಾ ಲಹರಿ.
ತಡೆಯುವವರಿಲ್ಲ ಮೂಕ ಸಂಭಾಷಣೆ.
ಹುಚ್ಚು ಕಲ್ಪನೆಯ ಹುಚ್ಚು ಸಾಲುಗಳು.
ಮಳೆಯ ಅಬ್ಬರದಲ್ಲಿ ಮನದ ಪರದಾಟ.
ಗೈರು ಹಾಜರಾದ ಕನಸಿನ ಕಾಟ.
ತೋಚಿದ್ದು ಗೀಚಿದ್ದು ಪದಗಳ ಆಟ.
ಮಳೆಹನಿಯ ತಂಪಿಲ್ಲ.
ಪದ-ದನಿಗಳ ಇಂಪಿಲ್ಲ.
ಟೊಳ್ಳು ಮನಸುಗಳ ನೂರೆಂಟು ಸುಳ್ಳುಗಳು
ಅಂತರಾತ್ಮದ ಮಾತಿಗಿಲ್ಲ ಹುಲ್ಲುಕಡ್ಡಿಯ ಬೆಲೆ
ಜೀವನ ಶಾಶ್ವತ ಹಾವು ಏಣಿ ಆಟ
ಅವ ಆಡೆಂದಾಗ ಆಟ
ಅವ ಸಾಕೆಂದಾಗ ಕುಂಭಿ ಪಾಕ!
ಕೆಲವರು ಜೊತೆಯಲ್ಲಿರ್ತಾರೆ
ಕೆಲವರು ಜೀವನದಲ್ಲಿರ್ತಾರೆ
ಹಲವರು ಕಣ್ಮುಂದೆನೇ ಇರ್ತಾರೆ
ಆದರೆ ಕೆಲವರು ನೆನಪಲ್ಲಿ ಮಾತ್ರ ಇರ್ತಾರೆ...
ಇಂದು ಇದ್ದೋರು ನಾಳೆ ಇರೋಲ್ಲ
ನೆನ್ನೆ ಇದ್ದ ನಂಟು, ಇಂದು ಅದದೆ ಜನರ ನಡುವೆ ಇಲ್ಲ
ಅವರ ಮುಖವಾಡ-ನಮ್ಮ ಮುಗ್ಧತೆ ಎರಡರ ಪ್ರದರ್ಶನ.
ಜೀವನದ ಮುಂದಿನ ಮೆಟ್ಟಿಲು ಹತ್ತುವ ಸಮಯ.
ಹೀಗೆ ಟ್ವಿಟ್ಟರ್ ಅಲ್ಲಿ ಗೀಚಿದ ಸಾಲುಗಳು .
ಅವಳ ಕನಸಿನ ತೀರಕ್ಕೆ ಮಿತಿಯಿಲ್ಲಾ.
ಕಡಲ ಕಾಯುವ ದೊಣ್ಣೆ ನಾಯಕನಪ್ಪಣೆ ಬೇಕಿಲ್ಲ!
ಕಡಲ ಕಣ್ಣಲ್ಲಿಯೂ ಅವಳದೆ ಕನಸು!
_______________________________________________________
ಕಡಲ ಅಲೆಗಳಲಿ
ತೇಲಿ ಬಿಡಬೇಕಿದೆ ಒಂದು ಚೀಲ...
ಕೂಡಿಟ್ಟ ಕನಸನು ಮೂಟೆ ಕಟ್ಟಿ
ಬರೆದಿಟ್ಟ ಕವನಗಳ ಜೊತೆಗೆ ತುರುಕಿ
ಬಚ್ಚಿಡಲು ಹೇಳಬೇಕಿದೆ
ಅಲೆಗಳ ಕಿವಿಯಲ್ಲಿ!
೩೧ ಮೇ ೨೦೧೫
_______________________________________________________ಮಳೆಯ ಗುಂಗುನಲಿ
ನಿನ್ನ ನೆನಪಿರಲಿ
ತೇಲಿ ಬಿಡುವೆನೊಂದು ಕವನ.
ಹಾಳೆ ದೋಣಿಯಲಿ
ಪ್ರೀತಿ ಮಾತಿರಲಿ
ತೇಲಿ ಬಿಡು ನೀ ಅದನ.
ಕಡಲ ಅಲೆಗಳಲಿ
ನಿಂತ ನೀರಿನಲಿ
ಹಾಯ ದೋಣಿ ನನ್ನ ಕವನ
ಸುಡುವ ಬಿಸಿಲಿರಲಿ
ಕೊರೆವ ಚಳಿಯಿರಲಿ
ಸಾಗುತಿರಲಿ ನಿನ್ನೆಡೆಗೆ ನನ್ನ ಪಯಣ!
೦೨ ಜೂನ್ ೨೦೧೫
________________________________________________________ಕರಾಳ ದಿನ
ಕಣ್ಣಲ್ಲಿ ಕಪ್ಪು ಕತ್ತಲು
ಮನಸ್ಸಲ್ಲಿ ಕೋಲ್ಮಿಂಚು
ಮಾತಿಗೆ ಸಿಗದ ಮೌನ
ಗುರಿಯ ಮುಚ್ಚಿಟ್ಟ ಕಂಬನಿ ಮಂಜು
ಹುಡುಕಾಟದಲ್ಲಿ ದಣಿವು
ಬಾಯಾರಿಕೆಗೆ ಒಂದೇ ಪರಿಹಾರ- ಛಲ!
೨೫ ಜೂನ್ ೨೦೧೫
________________________________________________________ಮೌನದಲ್ಲಿ ಮಾತುಗಳ ದೊಂಬರಾಟ.
ಮನದ ಕನ್ನಡಿಯಲ್ಲಿ ಕಾಡಿಸುವ ಕನಸುಗಳು.
ಹಿಡಿಯುವವರಿಲ್ಲ ಆಲೋಚನಾ ಲಹರಿ.
ತಡೆಯುವವರಿಲ್ಲ ಮೂಕ ಸಂಭಾಷಣೆ.
ಹುಚ್ಚು ಕಲ್ಪನೆಯ ಹುಚ್ಚು ಸಾಲುಗಳು.
ಮಳೆಯ ಅಬ್ಬರದಲ್ಲಿ ಮನದ ಪರದಾಟ.
ಗೈರು ಹಾಜರಾದ ಕನಸಿನ ಕಾಟ.
ತೋಚಿದ್ದು ಗೀಚಿದ್ದು ಪದಗಳ ಆಟ.
ಮಳೆಹನಿಯ ತಂಪಿಲ್ಲ.
ಪದ-ದನಿಗಳ ಇಂಪಿಲ್ಲ.
೧೬ ಆಗಸ್ಟ್ ೨೦೧೫
_________________________________________________________ಟೊಳ್ಳು ಮನಸುಗಳ ನೂರೆಂಟು ಸುಳ್ಳುಗಳು
ಅಂತರಾತ್ಮದ ಮಾತಿಗಿಲ್ಲ ಹುಲ್ಲುಕಡ್ಡಿಯ ಬೆಲೆ
ಜೀವನ ಶಾಶ್ವತ ಹಾವು ಏಣಿ ಆಟ
ಅವ ಆಡೆಂದಾಗ ಆಟ
ಅವ ಸಾಕೆಂದಾಗ ಕುಂಭಿ ಪಾಕ!
೧೨ ಅಕ್ಟೋಬರ್ ೨೦೧೫
_________________________________________________________ಕೆಲವರು ಜೊತೆಯಲ್ಲಿರ್ತಾರೆ
ಕೆಲವರು ಜೀವನದಲ್ಲಿರ್ತಾರೆ
ಹಲವರು ಕಣ್ಮುಂದೆನೇ ಇರ್ತಾರೆ
ಆದರೆ ಕೆಲವರು ನೆನಪಲ್ಲಿ ಮಾತ್ರ ಇರ್ತಾರೆ...
ಇಂದು ಇದ್ದೋರು ನಾಳೆ ಇರೋಲ್ಲ
ನೆನ್ನೆ ಇದ್ದ ನಂಟು, ಇಂದು ಅದದೆ ಜನರ ನಡುವೆ ಇಲ್ಲ
ಅವರ ಮುಖವಾಡ-ನಮ್ಮ ಮುಗ್ಧತೆ ಎರಡರ ಪ್ರದರ್ಶನ.
ಜೀವನದ ಮುಂದಿನ ಮೆಟ್ಟಿಲು ಹತ್ತುವ ಸಮಯ.
೧೨ ಡಿಸೆಂಬರ್ ೨೦೧೫
______________________________________________________________ಹೀಗೆ ಟ್ವಿಟ್ಟರ್ ಅಲ್ಲಿ ಗೀಚಿದ ಸಾಲುಗಳು .
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ